ಕನ್ನಡ ಬಾವುಟ ದಿನಾ೦ಕ 27.04.2012
ಕನ್ನಡ ಬಾವುಟ ಹಾರಿಸುವೆ
ಸಿರಿಗನ್ನಡ ದೇವಿಗೆ ವ೦ದಿಸುವೆ
ಕನ್ನಡ ಮಣ್ಣನು ಪೂಜಿಸುವೆ
ಸಿರಿಗನ್ನಡಕ್ಕಾಗಿ ಬಾಳುವೆ
ಕನ್ನಡವೆ೦ದರೆ ನನ್ನೀ ಹೃದಯಕೆ ಅಮೃತ ಸುರಿದ೦ತೆ
ಸಿರಿಗನ್ನಡವೆ೦ದರೆ ಬೆಳಕು ಹರಿದು ಕತ್ತಲು ಸರಿದ೦ತೆ
ಕನ್ನಡ ನಾಡ ಏಳಿಗೆಗಾಗಿ ನನ್ನ ಪ್ರಾಣವನ್ನೆ ಮುಡಿಪಿಡುವೆ
ನನ್ನೀ ಎದೆಯಲಿ ಕನ್ನಡ ಕಹಳೆಯ ನಿತ್ಯವೂ ಮೊಳಗಿಸುವೆ
ನಾಡಿಗೆ ಕೇಡನು ಬಯಸುವರೆದೆಗೆ ಸಿಡಿಗು೦ಡು ನಾನಾಗುವೆ
ಕನ್ನಡ ಮಣ್ಣಲಿ ಕೋಟಿ ದೇವರ ಪಾದದ ಸ್ಪರ್ಶವಿದೆ
ಕನ್ನಡ ಮಣ್ಣಲಿ ಸ್ನೇಹದ ಬೆಳೆಯನ್ನು ಬೆಳೆಯುವ ಸತ್ವವಿದೆ
ಕನ್ನಡ ನೆಲದಲಿ ಬಾಡದ ಹೂಗಳು ಚರಿತೆಯ ಪುಟದಲ್ಲಿವೆ
ಸಿರಿಗನ್ನಡ ದೇವಿಯ ಪಾದಕೆ ಪ್ರಾಣವ ಅರ್ಪಿಸಿ ನಗುತ್ತಲಿವೆ
ಅಳಿದರು ಉಳಿದರು ಕನ್ನಡ ನಾಡಿಗೆ ನನ್ನೇ ಅರ್ಪಿಸುವೆ
No comments:
Post a Comment