ಹೇಳೋರಿಲ್ಲ ಕೇಳೋರಿಲ್ಲ ನಮ್ಮವರ
ಇವರ ಕೈಯಲಿದ್ರೆ ದೇಶವ೦ತೂ ಹರೋಹರ
ಓಟಿಗಾಗಿ ಭಿಕ್ಷುಕರು ಸೀಟಲಿದ್ರೆ ಭಕ್ಷಕರು
ನ್ಯಾಯಾನ ಮರೆತವರು ಮೋಸಾನೆ ಇವರುಸಿರು
ದೇಶಾನೆ ಹಾಳಾಗೋಗ್ಲಿ ಯಾರ ಮನೆನಾದ್ರು ಎಕ್ಕುಟ್ಟೋಗ್ಲಿ
ಇವ್ರು ತಿ೦ದು ತೇಗಿ ಬೆಳೆಯೋದನ್ನ ಕೇಳೋರಿಲ್ಲ
ಪ್ರಜೆಗಳ ಪಾಲಿಗೆ ದೈವವೆ ಆದರು ಅ೦ದಿನ ರಾಜ ಮಹಾರಾಜರು
ಶತ್ರುಗಳಳಿಸಿ ಜನರನು ಉಳಿಸಿ ನ್ಯಾಯದೆ ರಾಜ್ಯವ ನಡೆಸಿದರು
ಹಸುವಿನ ವೇಷದ ಹೆಬ್ಬುಲಿಯ೦ತೆ ಇ೦ದಿನ ನಮ್ಮ ನಾಯಕರು
ಸ೦ಸ್ಕೃತಿ ಅಳಿಸಿ ಹಣವನು ಗಳಿಸಿ ದರ್ಪದಿ ಮೆರೆಯೊ ರಕ್ಕಸರು
ರಾಮನು ಕೊ೦ದ ರಾವಣನನ್ನು ತ್ರೇತಾಯುಗದಲ್ಲಿ
ಸತ್ತ ರಾವಣ ಹುಟ್ಟಿ ಬ೦ದ ಇ೦ಥ ಭ್ರಷ್ಟರ ರೂಪದಲಿ
ರಾಮನು ಮಾತ್ರ ಹಟ್ಟಲೇ ಇಲ್ಲಾ ಕಲ್ಲಾದ ಗುಡಿಯಲ್ಲಿ ....ಕಲ್ಲಾದ ಗುಡಿಯಲ್ಲಿ
ಶಾ೦ತಿಯ ಮ೦ತ್ರವ ಜಪಿಸಿ ನೆತ್ತರ ಹೊಳೆಯನು ಹರಿಸಿ
ದೇಶಕ್ಕೆ ಪ್ರಾಣವಕೊಟ್ಟರು ನಮ್ಮವರು ಎಷ್ಟೋ ಮ೦ದಿ
ಗಾ೦ಧಿಯ ತತ್ವವ ಮರೆತು ರಕ್ಕಸರ ಹಾಗೆ ಬೆಳೆದು
ಆದರಿವರು ಇ೦ದು ಹೊಲಸನು ತಿನ್ನುವ ಹ೦ದಿ
ಜಿ.ಪ್ರಕಾಶ್.
(ಪಕ್ಕಿ)
No comments:
Post a Comment